ಪುಟ್ಟಕ್ಕನ ಮಕ್ಕಳು ಖ್ಯಾತಿಯ ಅಕ್ಷರಾ ಅವರು ” ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌” ಶೋ ಬಿಡಲು ಕಾರಣವೇನು

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಹನಾ ಪಾತ್ರದಲ್ಲಿ ನಟಿಸುತ್ತಿದ್ದ ಅಕ್ಷರಾ ಅವರು “ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ” ಶೋನಿಂದ ಹೊರಗಡೆ ಬಂದಿದ್ದಾರೆ. ಕೆಲವೇ ವಾರಗಳಿಂದ ಹರ್ಷಿತ್‌ ಎನ್ನುವ ಸ್ಪರ್ಧಿ ಜೊತೆ ಅಕ್ಷರಾ ಡ್ಯಾನ್ಸ್‌ ಮಾಡುತ್ತಿದ್ದರು. ಕಳೆದ ವಾರದಿಂದ ಅವರು ಈ ಶೋನಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಕಳೆದ ವಾರ ಕೂಡ ಹರ್ಷಿತ್‌ ಕೂಡ ಡ್ಯಾನ್ಸ್‌ ಮಾಡಿರಲಿಲ್ಲ. ಈ ವಾರ “ಶ್ರಾವಣಿ ಸುಬ್ರಮಣ್ಯ ” ಧಾರಾವಾಹಿ ಶ್ರೀವಲ್ಲಿ ಪಾತ್ರಧಾರಿ ಡ್ಯಾನ್ಸ್‌ ಮಾಡಿದ್ದಾರೆ.

ನಟ ಶಿವರಾಜ್ ಕುಮಾರ್‌ , ವಿಜಯ್‌ ರಾಘವೇಂದ್ರ , ಚಿನ್ನಿ ಪ್ರಕಾಶ್‌ , ರಕ್ಷಿತಾ ಪ್ರೇಮ್‌ ಅವರು ಜಡ್ಜ್‌ ಆಗಿರುವ ” ಡ್ಯಾನ್ಸ್‌ ಶೋನಲ್ಲಿ ” ಪುಟ್ಟಕ್ಕನ ಮಕ್ಕಳು ” ಧಾರಾವಾಹಿ ಸಹನಾ ಪಾತ್ರಧಾರಿ ಅಕ್ಷರಾ ಅವರು ಸ್ಪರ್ಧಿಯಾಗಿದ್ದರು. ಕೆಲವೇ ವಾರ ಡ್ಯಾನ್ಸ್‌ ಮಾಡಿದ್ದ ಇವರು ಈಗ ಈ ಶೋನಿಂದ ಹೊರಗಡೆ ಬಂದಿದ್ದಾರೆ.

ಶೋ ಬಿಡಲು ಕಾರಣ :

ಶ್ರೀವಲ್ಲಿ ಅವರನ್ನು ಪರಿಚಯಿಸಿದ ನಿರೂಪಕಿ ಅನುಶ್ರೀ ಅವರು ಸಹನಾ ಅವರು ಕಾರಣಾಂತರಗಳಿಂದ ಈ ಶೋನಿಂದ ಹೊರ ನಡೆದಿದ್ದಾರೆ ಎಂದಷ್ಟೇ ಹೇಳಿದ್ದಾರೆ. ಸಹನಾ ಅವರು ನಿರ್ದಿಷ್ಟವಾಗಿ ಯಾವ ಕಾರಣಕ್ಕೆ ಧಾರಾವಾಹಿ ಬಿಟ್ರು ಎನ್ನೋದು ಮಾತ್ರ ರಿವೀಲ್‌ ಆಗಿಲ್ಲ. ಅಕ್ಷರಾ ಅವರು ಈ ಹಿಂದೆ ಯಾವುದೇ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ.ಹೀಗಾಗಿ ಇದು ಅವರ ಮೊದಲ ರಿಯಾಲಿಟಿ ಶೋ.

ಇವರ ಜಾಗಕ್ಕೆ ಶ್ರೀವಲ್ಲಿ ಬಂದಿದ್ದಾರೆ. ಇನ್ನು ಶ್ರೀವಲ್ಲಿ ಡ್ಯಾನ್ಸಗೆ ಸಾಕಷ್ಟು ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಡ್ಯಾನ್ಸ್‌ ಮಾಡಿದ ನಂತರದಲ್ಲಿ ಮಗಳು ಶಿವರಾಜ್‌ ಕುಮಾರ್‌ ಅವರಿಂದ ಹೊಗಳಿಸಿಕೊಂಡಿದ್ದು ನೋಡಿ ಅವರ ತಾಯಿ ಭಾವುಕರಾಗಿದ್ದಾರೆ.

ಸ್ಪರ್ಧಿಗಳು

ಈ ಶೋನಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಧನುಷ್‌, ಬಿಗ್ಬಾಸ್‌ ಕನ್ನಡ ಸೀಸನ್‌ ೪ ವಿಜೇತ ಪ್ರಥಮ್‌, ಬಿಗ್‌ ಬಾಸ್‌ ಕನ್ನಡ ಸೀಸನ್‌ ೯ ಸ್ಪರ್ಧಿ ಆರ್ಯವರ್ಧನ್‌ ಗುರೂಜಿ, ಮಜಾ ಟಾಕೀಸ್‌ ಶೋ ಖ್ಯಾತಿಯ ರೆಮೋ , ಖ್ಯಾತ ಕಲಾವಿದ ಮಿಮಿಕ್ರಿ ಗೋಪಿ, ಲಕ್ಮ್ಷೀ ನಿವಾಸ ಧಾರಾವಾಹಿಯ ನಟಿ ಯಶಸ್ವಿನಿ ಹಾಗೂ ವಿಶ್ವ ಪಾತ್ರಧಾರಿಯ ಭವಿಷ್‌ ಗೌಡ, ಮತ್ತು ಸೀತಾರಾಮ ಧಾರಾವಾಹಿಯ ಪ್ರಿಯಾ ಪಾತ್ರಧಾರಿಯ ಮೇಘನಾ ಶಂಕರಪ್ಪ , ರೀತು ಸಿಂಗ್‌ , “ಮಹಾನಟಿ” ರಿಯಾಲಿಟಿ ಶೋನ ಗಗನಾ , ಕೆಂಡ ಸಂಪಿಗೆ ಧಾರಾವಾಹಿಯ ಕಾವ್ಯ , “ಅಮೃತಾ ಧಾರೆ” ಧಾರಾವಾಹಿಯ ನಟ ಶಶಿ ಹೆಗಡೆ ಅವರು ಈ ಶೋನ ಸ್ಪರ್ಧಿಗಳು.

Scroll to Top