ಗಂಡನಿಗೆ ವೀಡಿಯೋ ಕಾಲ್‌ ಮಾಡಿ ಸೂಸೈಡ್‌ ಮಾಡಿಕೊಂಡ ಹೆಂಡತಿ

ಮುದ್ದಾದ ಹೆಂಡತಿಯಿದ್ದರೂ ಡಿವೋರ್ಸ್ ಗಾಗಿ ಪ್ರತಿದಿನ ಕಾಟ ಕೊಡ್ತಿದ್ದ ಗಂಡ. ಅನೈತಿಕ ಸಂಬಂಧ ಹೊಂದಿದ್ದ ಗಂಡ ಅದನ್ನು ತಿಳಿದು ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರದ ಹುಳಿಮಾವು ಸಮೀಪದ ಅಕ್ಷಯನಗರದಲ್ಲಿ ಸಂಭವಿಸಿದ ದುಃಖದ ಘಟನೆಗೆ ಸಂಬಂಧಿಸಿದೆ. ಅನುಷಾ ಎಂಬ ಮಹಿಳೆ ಮನನೊಂದ ಪರಿಣಾಮವಾಗಿ, ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ಬೆಂಕಿಯಿಂದ ಗಂಭೀರ ಗಾಯಗೊಂಡಿದ್ದ ಅನುಷಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಅನುಷಾ ಐದು ವರ್ಷಗಳ ಹಿಂದೆ ಶ್ರೀಹರಿಯೊಂದಿಗೆ ವಿವಾಹವಾಗಿದ್ದರು, ಮತ್ತು ಈ ದಂಪತಿಗೆ ಎರಡು ವರ್ಷದ ಮಗು ಕೂಡಾ ಇದೆ. ಇತ್ತೀಚೆಗೆ, ಅನುಷಾ ತನ್ನ ಪತಿಗೆ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧವಿದೆ ಎಂಬ ಶಂಕೆಯಿಂದ ಮನಸ್ತಾಪಕ್ಕೀಡಾಗಿದ್ದಳು. ಈ ಕಾರಣಕ್ಕಾಗಿ ದಂಪತಿಗಳ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಇದೇ ವಿಚಾರದಲ್ಲಿ ಗಲಾಟೆ ಉಂಟಾಗಿ, ತೀವ್ರ ಮನನೊಂದ ಅನುಷಾ ಬಾತ್‌ರೂಮಿನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಳು.

ಈ ದುಃಖದ ಘಟನೆಯಲ್ಲಿ ಆಕೆಯ ಪ್ರಾಣ ಕಳೆದುಹೋಗಿರುವುದು ಆ ಕುಟುಂಬಕ್ಕೆ ದೊಡ್ಡ ದುರಂತವಾಗಿದೆ. ಅನುಷಾ ಅವರ ತಂದೆ ಹೇಮಂತ ಮಾತನಾಡಿದ್ದು , ನಟ ದರ್ಶನ್‌ ಎರಡನೆ ಮದುವೆ ಆಗಿದ್ದಾನೆ ಆತ ಸಂತೋಷವಾಗಿಲ್ವಾ , ನಾನು ಎರಡನೇ ಮದುವೆ ಆದ್ರೇ ತಪ್ಪೇನು ಅಂತಾನೆ ಎಂದು ಹೇಳುತ್ತಿದ್ದ ಎಂದಿದ್ದಾರೆ.

ಗಂಡನಿಗೆ ವಾಟ್ಸಪ್‌ ಕಾಲ್‌ ಮಾಡುತ್ತಲೆ ಆತ್ಮಹತ್ಯೆ

ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ಅನುಷಾಳ ಅಕ್ಕ ಉಷಾ , ಗಂಡನಿಗೆ ವಾಟ್ಸಪ್ ಕಾಲ್‌ ಮಾಡುತ್ತಲೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಬೆಂಕಿ ಹಚ್ಚಿಕೊಳ್ಳೊದು ನೋಡಿದ್ರು ಶ್ರಿಹರಿ ಸುಮ್ಮನಾಗಿದ್ದ. ಮೂರು ತಿಂಗಳಿನಿಂದ ಡೈವರ್ಸ ಕೊಡುವಂತೆ ಪೀಡಿಸುತ್ತಿದ್ದ, ನನಗೆ ಬೇರೆ ಸಂಬಂಧವಿದೆ ನನ್ನ ಬಿಟ್ಟು ಬಿಡು ಎನ್ನುತ್ತಿದ್ದ. ಅನುಷಾಳನ್ನು ಕಾಪಾಡಬಹುದಿತ್ತು. ಆದ್ರೂ ಕಾಪಾಡಿಲ್ಲ, ಸಾಯಲಿ ಅಂತಾನೇ ಸುಮ್ಮನೇ ಇದ್ದಾನೆ. ಮದುವೆ ಆದಾಗಿಂದಲೂ ಚಿತ್ರಹಿಂಸೆ ನೀಡ್ತಾನೆ ಇದ್ದ ಎಂದು ಮೃತಳ ಅಕ್ಕ ಮಾಹಿತಿ ನೀಡಿದ್ದಾರೆ.

Follow For More details :

Scroll to Top