ದೇವರ ಪ್ರಸಾದ ತಿಂದು 3 ಜನ ಸಾವು : 6 ಜನ ಅಸ್ವಸ್ತ.

ದೇವರ ಕಾರ್ಯಕ್ರಮದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಮೂವರ ಸಾವನಪ್ಪಿದ ಪ್ರಕರಣ ತುಮಕೂರು ಜೆಲ್ಲೆಯ ಮಧುಗಿರಿ ತಾಲೂಕಿನ ಬುಳ್ಳಸಂದ್ರ ಗ್ರಾಮದಲ್ಲಿ ಈ ಘಟನೆ ನಡಿದಿದೆ.

ದೇವರ ಕಾರ್ಯಕ್ಕೆ ಮಾಡಿದ್ದ ಪ್ರಸಾದ ಸೇವೆನೆ ಮಾಡಿದವರಿಗೆ ಸುಮಾರು 14 ಕ್ಕೂ ಹೆಚ್ಚು ಮಂದಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ಇದರಿಂದ 45 ವರ್ಷದ ಕಾಟಮ್ಮ ಮಹಿಳೆ ಸಾವನಪ್ಪಿದ್ದಾರೆ, ಹಾಗೂ ಆರು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕ್ಕೊಳುತ್ತಿದ್ದಾರೆ.

ಶನಿವಾರ ಬುಲ್ಲಸಂದ್ರ ಗ್ರಾಮದಲ್ಲಿ ಕರಿಯಮ್ಮ ಹಾಗೂ ಮುತ್ತುರಾಯಸ್ವಾಮಿ ದೇವರಿಗೆ ಹರಿಸೇವೆ ಮಾಡಲಾಗಿತ್ತು. ಅದಕ್ಕೆ ಇಡಿ ಗ್ರಾಮದ ಜನತೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಬಳಿಕ ಗ್ರಾಮದ ಕೆಲವು ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ ಇದರಿಂದ ಸಾವನ್ನಾಪ್ಪಿದ್ದರೆ ಹಾಗೂ ಸ್ವಲ್ಪ ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಗ್ರಾಮಕ್ಕೆ ತಹಶೀಲ್ದಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ದೌಡಯಿಸಿದ್ದು. ಅಸ್ವಸ್ತ ಗೊಂಡ 6 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನು ಮುಂಜಾಗೃತಾ ಕ್ರಮವಾಗಿ ಲಕ್ಷಣ ಕಾಣಿಸಿಕೊಂಡವರಿಗೆ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯೊಂದರಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

Scroll to Top