Highlights : ಕನ್ನಡದ ಬೃಂದವನ ಸೀರಿಯಲ್ ನ ನಟ ವರುಣ್ ಆರಾಧ್ಯ ಮೇಲೆ ದೂರು ದಾಖಲು ಖಾಸಗಿ ಪೋಟೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪ ಕೇಳಿಬಂದಿದೆ.
ಕಿರುತೆರೆ ನಟ ವರುಣ್ ಅರಾಧ್ಯ ವಿರುದ್ಧ, ಬೆದರಿ ಹಾಕಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಬೃಂದಾವನ ಸೀರಿಯಲ್ನಲ್ಲೂ ನಟಿಸುತ್ತಿರುವ ವರುಣ್, ಅವರ ಸ್ನೇಹಿತೆ ವರ್ಷಾ ಕಾವೇರಿಯೊಂದಿಗೆ ಬ್ರೇಕಪ್ ಆಗಿದ್ದು, ಈ ಮಧ್ಯೆ ವರುಣ್ ವಿರುದ್ಧ ದೂರುಗಳು ಕೇಳಿ ಬರುತ್ತಿವೆ.
ವರ್ಷಾ ಕಾವೇರಿ ಬೃಂದಾವನ ಸೀರಿಯಲ್ ನಟ ವರುಣ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಗಳ ಪ್ರಕಾರ, ವರುಣ್ ಅವರ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದಾಗಿ ಬೆದರಿಕೆ ಹಾಕುತ್ತಿದ್ದಾನೆ.
ಆರೋಪದ ಹಿನ್ನೆಲೆ:
ವರುಣ್ ಮತ್ತು ವರ್ಷಾ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಜೋಡಿಯಾಗಿದ್ದರು, ಇನ್ಸ್ಟಾಗ್ರಾಮ್, ಫೇಸ್ಬುಕ್ ಸೇರಿದಂತೆ ಇತರ ಎಲ್ಲಾ ಫ್ಲಾಟ್ಫಾರ್ಮ್ಗಳಲ್ಲಿ ಜನಪ್ರಿಯರಾಗಿದ್ದರು.
ಬ್ರೇಕಪ್ ನಂತರ, ವರುಣ್ ಅವರ ಖಾಸಗಿ ವೀಡಿಯೊಗಳನ್ನು ಸಾರ್ವಜನಿಕವಾಗಿ ಹಂಚುವುದಾಗಿ ಬೆದರಿಸುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು, ಈ ತನಿಖೆಯನ್ನು ಮುಂದುವರಿಸುತ್ತಿದ್ದಾರೆ.
ನಟ ವರ್ಷಾ ಕಾವೇರಿ ಅವರು ತಮ್ಮ ಮಾಜಿ ಪ್ರಿಯಕರ ವರುಣ್ ಅರಾಧ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅವರ ಪ್ರಕಾರ, ವರುಣ್ ಜೋಡಿಯಾಗಿ ಇದ್ದ ಸಮಯದಲ್ಲಿ ತೆಗೆದುಕೊಂಡ ವೈಯಕ್ತಿಕ ಫೋಟೋ ಹಾಗೂ ವಿಡಿಯೋಗಳನ್ನು ಬಳಸಿ, ಬೆದರಿಕೆ ಹಾಕುತ್ತಿದ್ದಾನೆ.
ಅಪಾಯಕರ ಬೆದರಿಕೆ:
ವರುಣ್, “ಬೇರೆಯವರನ್ನು ಮದುವೆಯಾದರೆ ನಿನ್ನನ್ನು ಮತ್ತು ಆತನನ್ನು ಸಾಯಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎಂದು ವರ್ಷಾ ಆರೋಪಿಸಿದ್ದಾರೆ.
ವಾಟ್ಸಾಪ್ ಮೂಲಕ ಖಾಸಗಿ ಫೋಟೋಗಳನ್ನು ಕಳುಹಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ.
ಈ ಕುರಿತು ವರ್ಷಾ ಕಾವೇರಿ ದೂರು ದಾಖಲಿಸಿದ್ದು, ವರುಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ, ಮತ್ತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.