ಮನೆಯಲ್ಲಿ ಮಗು ಹುಟ್ಟಿತ್ತು ಎಂದು ಮನೆಯವರೆಲ್ಲ ಖುಷಿಯಾಗಿರುವ ಸಂಧರ್ಭದಲ್ಲಿ ಮನಮಿಡಿಯುವ ಘಟನೆಯೊಂದು ನಡೆದೆ ಹೋಯಿತು. ಮಗುವಿನ ತಾಯಿ ಮಹಾಲಕ್ಮ್ಷಿ ಹುಟ್ಟಿದ್ದಾಳೆ ಎಂದು ಸಂಭ್ರಮ ಪಡುವಷ್ಟರಲ್ಲಿ ತಾಯಿಗೆ ಹೃದಯಾಘಾತವಾಯಿತವಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಸಿರಿಶಾ ಮೃತ ಮಹಿಳೆ. ನಿರ್ಮಲ್ ಜಿಲ್ಲೆಯ ಖಾನಾಪುರ ಪಟ್ಟಣದ ಶ್ರೀರಾಮನಗರ ಕಾಲೋನಿಯ ಮಾಮಿದಾಳ ರಾಜಶೇಖರ್-ಸಿರಿಶಾ ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ.ಇತ್ತೀಚೆಗಷ್ಟೇ ಅವರಿಗೆ ಎರಡನೇ ಮಗುವಾಗಿತ್ತು. ಮಗು ಜನಿಸಿ 21 ದಿನಕ್ಕೆ ತಾಯಿ ಪ್ರಾಣ ಬಿಟ್ಟಿದ್ದಾಳೆ.
ಸಿರಿಶಾ ರಾತ್ರಿಯವರೆಗೂ ಮಗುವಿನ ಜೊತೆಗೆ ಇದ್ದು ನಿದ್ದೆಗೆ ಜಾರಿದ್ದಳು. ಆದರೆ ಮಧ್ಯರಾತ್ರಿಯ ನಂತರ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಸಿರಿಶಾ ತಿಳಿಸಿದ್ದು, ಕೂಡಲೇ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ.
ಈ ದಿಢೀರ್ ಘಟನೆಯಿಂದ ಆಘಾತಕ್ಕೊಳಗಾದ ಕುಟುಂಬಸ್ಥರು ಮಗುವಿಗೆ ತೊಟ್ಟಿಲು ಹಾಕಿ ಹೆಸರು ಇಡುವ ದಿನವೇ ತಾಯಿಯ ಸಾವನ್ನಪ್ಪಿರುವುದು ಖಾನಾಪುರದಲ್ಲಿ ದುಃಖ ಮಡುಗಟ್ಟಿತ್ತು. ಶುಕ್ರವಾರ ರಾತ್ರಿ ಆಕೆಯ ಶವವನ್ನು ಖಾನಾಪುರಕ್ಕೆ ತಂದು ಅಂತ್ಯಸಂಸ್ಕಾರ ಮಾಡಲಾಯಿತು.ಸಾವು ಯಾವ ಕ್ಷಣದಲ್ಲಿ ಯಾದರೂ ಕೂಡ ಅಪ್ಪಳಸಿಬಹುದು ಅನ್ನುವುದಕ್ಕೆ ಇದೊಂದು ಉದಾರಣೆಯಾಗಿದೆ.
This Post ” ಮಗುವಿನ ತೊಟ್ಟಿಲು ಶಾಸ್ತ್ರ ದಿನವೇ ಪ್ರಾನ ಬಿಟ್ಟ ತಾಯಿ ! ವಿಧಿ ಆಟಕ್ಕೆ ಕುಟುಂಬಸ್ಥರಲ್ಲಿ ಮಡುಗಟ್ಟಿದ ದು:ಖ.first appeared on vijayavani
14 ತಿಂಗಳು ಕಿಡ್ನಾಪರ್ ಜೊತೆಗೆ ಇದ್ದ ಮಗು. ಕೊನೆಯಲ್ಲಿ ಆಗಿದ್ದೇ ಬೇರೆ
18 ವರ್ಷದ ಸಮೋಸಾ ಮಾರಾಟಗಾರ NEET ಪರೀಕ್ಷೆಯಲ್ಲಿ 664 ಅಂಕ ಗಳಿಸಿದ್ದಾನೆ